Yuva Nidhi scheme :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಯುವನಿಧಿ ಯೋಜನೆಯ ಫಲಾನುಭವಿಗಳಾಗಿದ್ದರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಹೊಸ ರೂಲ್ಸ್ ಜಾರಿಗೆ ತರಲಾಗಿದೆ ಈ ರೂಲ್ಸ್ ಪಾಲಿಸಿದರೆ ಮಾತ್ರ ನಿಮಗೆ ಯುವನಿಧಿ ಯೋಜನೆಗೆ 3000 ನಿರುದ್ಯೋಗ ಬತ್ತಿ ಪ್ರತಿ ತಿಂಗಳು ಬರುತ್ತೆ.. ಯುವನಿಧಿ ಯೋಜನೆಯ ಹೊಸ ರೂಲ್ಸ್ ಯಾವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ಜಿಲ್ಲೆಗಳಲ್ಲಿ ಬಿಡುಗಡೆ ಇಲ್ಲಿದೆ ಮಾಹಿತಿ
ಇದೇ ರೀತಿ ಸರಕಾರಿ ನೌಕರಿ ಆಗುವ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮತ್ತು ರೈತರಿಗೆ ಸಂಬಂಧಿಸಿದಂತೆ ರೈತ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಪ್ರತಿಯೊಂದು ಮಾಹಿತಿ ನೀವು ಬೇಗ ಪಡೆದುಕೊಳ್ಳಬೇಕು ಅಂದರೆ ನೀವು ನಮ್ಮ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಯುವ ನಿಧಿ (Yuva Nidhi scheme) ಯೋಜನೆ..?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಅವುಗಳಲ್ಲಿ ಯುವನಿಧಿ ಯೋಜನೆ ಕೂಡ ಒಂದು ಗ್ಯಾರಂಟಿಯಾಗಿದ್ದು ಈ ಯೋಜನೆಯ ಮೂಲಕ ಡಿಗ್ರಿ ಹಾಗೂ ಡಿಪ್ಲೋಮೋ ಪದವಿ ಮುಗಿಸಿದ ವಿದ್ಯಾರ್ಥಿಗಳು ಯಾವುದೇ ಕೆಲಸ ಇಲ್ಲದೆ ನಿರುದ್ಯೋಗಿಗಳ ಆಗಿದ್ದ ಪಕ್ಷದಲ್ಲಿ ಅಂತ ಅಭ್ಯರ್ಥಿಗಳಿಗೆ ಈ ಯೋಜನೆ ಮೂಲಕ 3000 ಹಾಗೂ ಡಿಪ್ಲೋಮೋ ಮುಗಿಸಿದ ಅಭ್ಯರ್ಥಿಗಳಿಗೆ ರೂ.1500 ಪ್ರತಿ ತಿಂಗಳು ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ
ಹೌದು ಸ್ನೇಹಿತರೆ ಈ ಯುವನಿಧಿ ಯೋಜನೆ ಮೂಲಕ ಅರ್ಜಿ ಹಾಕಿದಂತಹ ನಿರುದ್ಯೋಗಿ ಯುವಕರು ಡಿಪ್ಲೋಮೋ ಮತ್ತು ಡಿಗ್ರಿ ಮುಗಿಸಿದಂತ ವಿದ್ಯಾರ್ಥಿಗಳಿಗೆ ಉದ್ಯೋಗ (ಎರಡು ವರ್ಷಗಳವರೆಗೆ ಮಾತ್ರ) ಸಿಗುವವರೆಗೆ ಈ ಯೋಜನೆಯ ಮೂಲಕ ಡಿಗ್ರಿ ಅಥವಾ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮೋ ಮುಗಿಸಿದ ವಿದ್ಯಾರ್ಥಿಗಳಿಗೆ 1,500 ಹಾಕುವಂತ ಒಂದು ಯೋಜನೆ ಎಂದರೆ ಅದು ಯುವ ನಿಧಿ ಯೋಜನೆ
ಯುವ ನಿಧಿ ಯೋಜನೆ (Yuva Nidhi scheme) ಹೊಸ ಅಪ್ಡೇಟ್…?
ಹೌದು ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲು ಸ್ವಲ್ಪ ವಿಳಂಬನೆ ಮಾಡಿದ್ದರೂ ಕೂಡ ಈ ಯೋಜನೆ ಸದ್ಯದ ಮಟ್ಟಿಗೆ ಜಾರಿಯಲ್ಲಿ ತರಲಾಗಿದ್ದು ಸದ್ಯಕ್ಕೆ ಪ್ರತಿಯೊಂದು ಜಿಲ್ಲೆಯಲ್ಲಿ ಅರ್ಜಿ ಹಾಕಿದಂತ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೂಲ ಶೈಕ್ಷಣಿಕ ಪ್ರಮಾಣ ಪತ್ರ, ಹಾಗೂ ಆಧಾರ್ ಕಾರ್ಡ್ ಸೇರಿದಂತೆ ತಮ್ಮ ಶಿಕ್ಷಣಕ್ಕೆ ಹಾಗೂ ನಿರುದ್ಯೋಗಕ್ಕೆ ಸಂಬಂಧಿಸಿದಂತ ಎಲ್ಲಾ ಪ್ರಮುಖ ದಾಖಲಾತಿಗಳನ್ನು ವೆರಿಫಿಕೇಶನ್ ಸಲ್ಲಿಸಬೇಕು.
ಹೌದು ಸ್ನೇಹಿತರೆ ಯುವ ನಿಧಿ ಯೋಜನೆಗೆ ಅರ್ಜಿ ಹಾಕಿದಂತ ಅಭ್ಯರ್ಥಿಗಳು ತಮ್ಮ ಎಲ್ಲಾ ಪ್ರಮುಖ ದಾಖಲಾತಿಗಳನ್ನು ಈ ತಿಂಗಳು ಜೂನ್ 25ನೇ ತಾರೀಕಿನ ಒಳಗೆ ವೆರಿಫಿಕೇಶನ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ವೆರಿಫಿಕೇಶನ್ ಮಾಡಿಸಿಕೊಳ್ಳಬೇಕು.
ಹೌದು ಸ್ನೇಹಿತರೆ ಈ ತಿಂಗಳು 25ನೇ ತಾರೀಖಿನ ಒಳಗಡೆಯಾಗಿ ನಿಮ್ಮ ಹತ್ತಿರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಾವು ಯಾವುದೇ ಉದ್ಯೋಗ ಮಾಡುತ್ತಿಲ್ಲ ಹಾಗೂ ನಿರುದ್ಯೋಗಿ ಎಂದು ದೃಢೀಕರಿಸಲು, ದೃಢೀಕರಣ ಪತ್ರವನ್ನು ನೀಡಬೇಕು, ಎಂದು ಪ್ರಕಟಣೆ ಮಾಡಲಾಗಿದೆ ಹಾಗಾಗಿ ನಿಮ್ಮ ಹತ್ತಿರದ ಜಿಲ್ಲಾ ಉದ್ಯೋಗ ನಿಗಮಕ್ಕೆ ಭೇಟಿ ನೀಡಿ ಅಥವಾ ಆನ್ಲೈನ್ ಮೂಲಕವೂ ಕೂಡ ದೃಢೀಕರಣ ಪ್ರಮಾಣ ಪತ್ರವನ್ನು ವೆರಿಫಿಕೇಶನ್ ಮಾಡಬಹುದು
ಯುವ ನಿಧಿ ಯೋಜನೆಯ (Yuva Nidhi scheme) ಹೊಸ ರೂಲ್ಸ್..?
ನಿರುದ್ಯೋಗಿ ದೃಢೀಕರಣ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಹಾಕಿದಂತ ಅಭ್ಯರ್ಥಿಗಳು ಪ್ರತಿ ತಿಂಗಳು 25ನೇ ತಾರೀಖಿನ ಒಳಗಡೆ ತಾವು ನಿರುದ್ಯೋಗಿಗಳು ಎಂದು ಸ್ವಯಂ ಘೋಷಣ ಪ್ರಮಾಣ ಪತ್ರವನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಪ್ರತಿ ತಿಂಗಳು ಅಪ್ಡೇಟ್ ಮಾಡಿಕೊಳ್ಳಬೇಕು ಅಂದರೆ ಮಾತ್ರ ನಿಮಗೆ ಈ ಯುವನಿಧಿ ಯೋಜನೆಯ ಪ್ರತಿ ತಿಂಗಳು 3000 ಹಣ ಬರುತ್ತೆ
ಈ ಯೋಜನೆಗೆ ಅರ್ಜಿ ಹಾಕಿದಂತ ಫಲಾನುಭವಿಗಳು ಆರು ತಿಂಗಳ ನಂತರ ತಮ್ಮ ಬ್ಯಾಂಕಿಗೆ ಸಂಬಂಧಿಸಿದಂತೆ ಅರ್ಜಿ ಹಾಕಿದ ದಿನಾಂಕದಿಂದ 6 ತಿಂಗಳ ತನಕ ತಮ್ಮ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಸೇವಾ ಸಿಂಧು ಪೋರ್ಟಲ್ ಮೂಲಕ ಅಪ್ಡೇಟ್ ಮಾಡಬೇಕು.
ಈ ಯೋಜನೆಗೆ ಅರ್ಜಿ ಹಾಕಿದಂತ ಫಲಾನುಭವಿಗಳು ಅರ್ಜಿ ಹಾಕಿದ ನಂತರ ಎರಡು ವರ್ಷಗಳ ಕಾಲಾವಧಿಗೆ ಮಾತ್ರ ನಿಮಗೆ ಈ ಯೋಜನೆಯ ಮೂಲಕ ನಿರುದ್ಯೋಗಿ ಭತ್ಯೆ ಸಿಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಿದಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಉನ್ನತ ಶಿಕ್ಷಣ ಪಡೆಯುತ್ತಿದ್ದರೆ ಅಂತವರಿಗೆ ತಕ್ಷಣ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ
ಈ ಯೋಜನೆಗೆ ಅರ್ಜಿ ಸಲ್ಲಿಸಿದಂತ ಅಭ್ಯರ್ಥಿಗಳು ಉದ್ಯೋಗ ಇದ್ದರೂ ಕೂಡ ನಿರುದ್ಯೋಗಿಗಳು ಎಂದು ಅರ್ಜಿ ಹಾಕಿದರೆ.. ಈ ಮಾಹಿತಿ ಸರ್ಕಾರಕ್ಕೆ ಗೊತ್ತಾದರೆ ನಿಮಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರ ನೀಡಲಾಗಿದೆ
ಈ ಯೋಜನೆಗೆ ಅರ್ಜಿ ಸಲ್ಲಿಸಿದಂತ ಅಭ್ಯರ್ಥಿಗಳು ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಸಲ್ಲಿಸಬೇಕು ಅಂದರೆ ಮಾತ್ರ ನಿಮಗೆ ಪ್ರತಿ ತಿಂಗಳು ಹಣ ಬರುತ್ತೆ ಇಲ್ಲವಾದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ
ಈ ಮೇಲೆ ನೀಡಿದಂತ ಎಲ್ಲಾ ನಿಯಮಗಳನ್ನು ಯುವ ನಿಧಿ ಯೋಜನೆಗೆ ಅರ್ಜಿ ಹಾಕಿದಂತ ಫಲಾನುಭವಿಗಳು ಪಾಲಿಸಬೇಕು
ವಿಶೇಷ ಸೂಚನೆ:- ಈ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಲು ಇವನಿಗೆ ಯೋಜನೆಗೆ ಸಂಬಂಧಪಟ್ಟಂತ ದೂರವಾಣಿ ಕರೆ ಮಾಡಬಹುದು ಮತ್ತು ಜಿಲ್ಲಾ ಉದ್ಯೋಗ ಅಧಿಕಾರಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು
ದೂರವಾಣಿ ಸಂಖ್ಯೆ:- 18005999918
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಯುವ ನಿಧಿ ಯೋಜನೆಗೆ ಅರ್ಜಿ ಹಾಕಿದಂತ ಎಲ್ಲಾ ಫಲಾನುಭವಿಗಳಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ