bara parihar payment:- ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಬರ ಪರಿಹಾರದ ಹಣಕ್ಕಾಗಿ ಕಾಯ್ತಾ ಇದ್ರೆ ಹಾಗಾದರೆ ನಿಮಗೆ ಗುಡ್ ನ್ಯೂಸ್ ಬರ ಪರಿಹಾರದ ಮೂರನೇ ಕಂತಿನ ಹಣ ಮೂರು ಸಾವಿರ ಬಿಡುಗಡೆಯಾಗಿದೆ ಇದನ್ನು ಯಾವ ರೀತಿ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ಈ ಲೇಖನೆಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ.
ಉಚಿತ ಹೊಲಗೆ ಯಂತ್ರ ಅರ್ಜಿ ಪ್ರಾರಂಭ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ಸ್ನೇಹಿತರೆ ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದಂತೆ ಮತ್ತು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಬಿಡುಗಡೆ ಮಾಡುವ ವಿವಿಧ ರೀತಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಬರ ಪರಿಹಾರ (bara parihar payment)..?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ ಬರಗಾಲ ಪರಿಸ್ಥಿತಿ ಎದುರಾಗಿತ್ತು ಮತ್ತು ಇದರಿಂದ ತುಂಬಾ ರೈತರು ಬೆಳೆ ನಷ್ಟ ಹಾಗೂ ಬೆಳೆದ ಬೆಳೆ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿ ಆಗಲಿಲ್ಲ ಇದರಿಂದ ರೈತರು ತುಂಬಾ ಸಂಕಷ್ಟ ಎದುರಿಸುವಂತೆ ಈ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು 224 ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಯಿತು.
ಆದ್ದರಿಂದ ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ನೆರವಿಗಾಗಿ ಬರ ಪರಿಹಾರ ಹಣವನ್ನು ಎರಡು ಕಂಚಿನ ರೂಪದಲ್ಲಿ ಈಗಾಗಲೇ ಬಿಡುಗಡೆ ಮಾಡಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ ಮತ್ತು ಮೂರನೇ ಕಂತಿನ ಹಣಕ್ಕಾಗಿ ತುಂಬಾ ರೈತರು ಕಾಯುತ್ತಿದ್ದು ಯಾವಾಗ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ
ಬರ ಪರಿಹಾರದ (bara parihar payment) ಮೂರನೇ ಕಂತಿನ ಹಣ ಬಿಡುಗಡೆ..?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ರಾಜ್ಯದ ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡರು ತಿಳಿಸಿರುವ ಪ್ರಕಾರ ನಮ್ಮ ರಾಜ್ಯದಲ್ಲಿ ಸುಮಾರು 17 ಲಕ್ಷಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಇದಾರೆ ಎಂದು ಗುರುತಿಸಲಾಗಿದೆ ಅಂತ ರೈತರ ಖಾತೆಗೆ ಜುಲೈ 8ನೇ ತಾರೀಖಿನಿಂದ ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆ ಮಾಡಲು ಪ್ರಾರಂಭ ಮಾಡಿದೆ.
ಹೌದು ಸ್ನೇಹಿತರೆ ಬರ ಪರಿಹಾರ ಮೂರನೇ ಕಂತಿನ ಹಣ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 2800 ರಿಂದ 3000 ಹಣ ಅರ್ಹ ರೈತರ ಖಾತೆಗೆ ಈಗಾಗಲೇ ವರ್ಗಾವಣೆ ಮಾಡಿದೆ ಇದಕ್ಕೆ ಸಾಕ್ಷಿ ಎಂಬುವಂತೆ ನಾವು ಮೇಲೆ ಒಂದು ಸ್ಕ್ರೀನ್ಶಾಟ್ ಹಾಕಿದ್ದೇವೆ ನೋಡಬಹುದು. ಹಾಗೂ ಬರ ಪರಿಹಾರದ ಹಣ ಯಾವ ರೀತಿ ಚೆಕ್ ಮಾಡುವುದು ಎಂಬುದನ್ನು ಈಗ ತಿಳಿದುಕೊಳ್ಳೋಣ
ಬರ ಪರಿಹಾರದ ಹಣ (bara parihar payment) ಯಾವ ರೀತಿ ಚೆಕ್ ಮಾಡಬೇಕು…?
ಸ್ನೇಹಿತರೆ ನೀವು ಬರ ಪರಿಹಾರದ ಹಣ ಚೆಕ್ ಮಾಡಲು ನೀವು ಮೊದಲು ನಿಮ್ಮ ಪ್ಲೇ ಸ್ಟೋರ್ ಓಪನ್ ಮಾಡಿಕೊಳ್ಳಿ ನಂತರ ಅಲ್ಲಿ Karnataka DBT ಸ್ಟೇಟಸ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು. ಅದರ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ
ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ ನಂತರ ನಿಮಗೆ ನಾಲ್ಕು ಅಂಕಿಯ ಪಿನ್ ಕ್ರಿಯೇಟ್ ಮಾಡಲು ಕೇಳುತ್ತದೆ ನಂತರ ನೀವು ಪಿನ್ ಕ್ರಿಯೇಟ್ ಮಾಡಿದ ನಂತರ ಅಪ್ಲಿಕೇಶನ್ ಓಪನ್ ಮಾಡಿದ ತಕ್ಷಣ ನಿಮಗೆ ನಾಲ್ಕು ರೀತಿಯ ಆಪ್ಷನ್ಸ್ ಕಾಣುತ್ತದೆ.
ಅಲ್ಲಿ ನೀವು ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ ಸಬ್ಸಿಡಿ ಇನ್ಪುಟ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಇಲ್ಲಿವರೆಗೂ ಬೆಳೆ ಪರಿಹಾರದ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿ ಸುಲಭವಾಗಿ ತಿಳಿದುಕೊಳ್ಳಬಹುದು
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮತ್ತು ನಿಮ್ಮ ಅಕ್ಕಪಕ್ಕದ ರೈತರಿಗೆ ಹಾಗೂ ಬರ ಪರಿಹಾರ ಹಣ ಜಮಾ ಆಗದೇ ಇರುವ ರೈತರಿಗೆ ಈ ಲೇಖನವನ್ನು ಶೇರ್ ಮಾಡಿ